Ration Card: ನಿಮಗೊತ್ತಾ ಇದೇ ಕಾರಣಗಳಿಗಾಗಿ ನಿಮ್ಮ ಪಡಿತರ ಚೀಟಿ ರದ್ದಾಗುವ ಸಾಧ್ಯತೆಗಳಿವೆ!

Updated on 02-May-2022
HIGHLIGHTS

Ration Card Rules ನೀವೂ ಒಂದು ವೇಳೆ ಪಡಿತರ ಚೀಟಿಧಾರಕರಾಗಿದ್ದಾರೆ ಈ ಸುದ್ದಿ ನಿಮಗಾಗಲಿದೆ.

ಸರಕಾರದಿಂದ ಸಿಗುವ ಉಚಿತ ಪಡಿತರದ ಲಾಭವನ್ನು ಲಕ್ಷಗಟ್ಟಲೆ ಅನರ್ಹರು ಸಹ ಪಡೆಯುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ.

ಇದರ ಆಧಾರದ ಮೇಲೆ ಆರು ತಿಂಗಳಿಂದ ಪಡಿತರ ಪಡೆಯದವರ ಪಡಿತರ ಚೀಟಿ ರದ್ದುಗೊಳಿಸಲಾಗಿದೆ.

Ration Card Rules: ನೀವೂ ಒಂದು ವೇಳೆ ಪಡಿತರ ಚೀಟಿಧಾರಕರಾಗಿದ್ದಾರೆ ಈ ಸುದ್ದಿ ನಿಮಗಾಗಲಿದೆ. ಕರೋನಾ ಮಹಾಮಾರಿಯ ಸಮಯದಲ್ಲಿ ಸರ್ಕಾರವು ಬಡವರಿಗೆ ಉಚಿತ ಪಡಿತರ ವ್ಯವಸ್ಥೆಯನ್ನು ಪ್ರಾರಂಭಿಸಿತ್ತು. ಆದರೆ ಕೊನೆಯ ದಿನಗಳಲ್ಲಿ ಸರಕಾರದಿಂದ ಸಿಗುವ ಉಚಿತ ಪಡಿತರದ ಲಾಭವನ್ನು ಲಕ್ಷಗಟ್ಟಲೆ ಅನರ್ಹರು ಸಹ ಪಡೆಯುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಸರಬರಾಜು ಇಲಾಖೆಯ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಯು ಆರು ತಿಂಗಳಿಂದ ಪಡಿತರವನ್ನು ತೆಗೆದುಕೊಳ್ಳದಿದ್ದರೆ ಅವನಿಗೆ ಪಡಿತರ ಅಗತ್ಯವಿಲ್ಲ ಅಥವಾ ಅನರ್ಹ ಎಂದು ಪರಿಗಣಿಸಲಾಗುತ್ತದೆ. ಇದರ ಆಧಾರದ ಮೇಲೆ ಆರು ತಿಂಗಳಿಂದ ಪಡಿತರ ಪಡೆಯದವರ ಪಡಿತರ ಚೀಟಿ ರದ್ದುಗೊಳಿಸಲಾಗಿದೆ. 

ಏನಿದು ಪಡಿತರ ಚೀಟಿ ನಿಮಯ?

ಪಡಿತರ ಚೀಟಿ ಹೊಂದಿದವರ ಬಳಿ ಸ್ವಂತ ಆದಾಯದಿಂದ ಗಳಿಸಿದ 100 ಚದರ ಮೀಟರ್ ವಿಸ್ತೀರ್ಣದ ನಿವೇಶನ/ಫ್ಲಾಟ್ ಅಥವಾ ಮನೆ ಇದ್ದರೆ ಅಥವಾ ನಾಲ್ಕು ಚಕ್ರ ವಾಹನ/ಟ್ರಾಕ್ಟರ್ ಶಸ್ತ್ರಾಸ್ತ್ರ ಪರವಾನಗಿ ಕುಟುಂಬದ ಆದಾಯವು ಗ್ರಾಮದಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಮತ್ತು ನಗರದಲ್ಲಿ ವಾರ್ಷಿಕ ಮೂರು ಲಕ್ಷ ರೂ.ಗಿಂತ ಹೆಚ್ಚಾಗಿದ್ದರೆ ಅಂತಹ ಜನರು ತಮ್ಮ ಪಡಿತರ ಚೀಟಿಯನ್ನು ತಹಸಿಲ್ ಮತ್ತು ಡಿಎಸ್ಒ ಕಚೇರಿಯಲ್ಲಿ ಸರೆಂಡರ್ ಮಾಡಬೇಕಾಗಲಿದೆ. ಇದಕ್ಕಾಗಿ ಸರಕಾರ ಜನರಲ್ಲಿ ಮನವಿ ಮಾಡುತ್ತಿದ್ದು ಅನರ್ಹರು ತಾವೇ ಖುದ್ದಾಗಿ ಪಡಿತರ ಚೀಟಿ ರದ್ದುಪಡಿಸಿಕೊಡಬೇಕು ಎಂದು ಹೇಳಿದೆ.

ಅನರ್ಹ ಪಡಿತರ ಚೀಟಿ ರದ್ದುಗೊಳಿಸಲಾಗುವುದು

ಸರ್ಕಾರದ ನಿಯಮಗಳ ಪ್ರಕಾರ ಅನರ್ಹ ಪಡಿತರ ಚೀಟಿದಾರರು ತಮ್ಮ ಕಾರ್ಡನ್ನು ಸರೆಂಡರ್ ಮಾಡದೆ ಹೋದಲ್ಲಿ ಪರಿಶೀಲನೆಯ ಬಳಿಕ ಅಂತಹ ಜನರ ಕಾರ್ಡ್ ಅನ್ನು ರದ್ದುಗೊಳಿಸಲಾಗುವುದು ಎನ್ನಲಾಗಿದೆ. ಇದಲ್ಲದೆ ಆ ಕುಟುಂಬದ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎನ್ನಲಾಗಿದೆ. ಅಷ್ಟೇ ಅಲ್ಲ ಅಂತಹವರಿಂದ ಅವರು ಪಡೆದ ಪಡಿತರವನ್ನೂ ಕೂಡ ವಸೂಲಿ ಮಾಡಲಾಗುವುದು ಎನ್ನಲಾಗಿದೆ. ಪಡಿತರ ಚೀಟಿ ಒಂದು ವೇಳೆ ರದ್ದುಪಡಿಸದಿದ್ದರೆ ಪರಿಶೀಲನೆ ಬಳಿಕ ಆಹಾರ ಇಲಾಖೆಯ ತಂಡ ಅವುಗಳನ್ನು ರದ್ದುಪಡಿಸಿ ಅನರ್ಹರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :