UDAN Scheme: ಭಾರತೀಯರು ಶೀಘ್ರದಲ್ಲೇ ಬ್ಯಾಂಗ್ಕಾಕ್ ಮತ್ತು ಕಾಟ್ಮಂಡುವಿಗೆ ಕೇವಲ 2500 ರೂಗಳಲ್ಲಿ ಹೋಗಬಹುದು.

Updated on 17-Jan-2019
HIGHLIGHTS

ಉಡ್ ದೇಶ್ ಕಾ ಆಮ್ ನಾಗ್ರಿಕ್ (UDAN) ಯೋಜನೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯೋಜನೆಯಾಗಿದೆ.

ಭಾರತದಲ್ಲಿ 2016 ರಲ್ಲಿ ಮಹತ್ವಾಕಾಂಕ್ಷೆಯ ಉಡ್ ದೇಶ್ ಕಾ ಆಮ್ ನಾಗ್ರಿಕ್ (UDAN) ಯೋಜನೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಾಯು ಸಂಪರ್ಕವನ್ನು ಉತ್ತಮಗೊಳಿಸಲು ಮತ್ತು ವಿಮಾನಯಾನ ಕೈಗೆಟುಕುವಿಕೆಯನ್ನು ಮಾಡಲು ಮತ್ತೊಂದು ಗುರಿಯ ಮೂಕಲ ಸಾಮಾನ್ಯ ಜನರಿಗಾಗಿ ನೀಡಿತ್ತು ಈಗ ಕೆಲ ವರದಿಗಳ ಪ್ರಕಾರ ಈ UDAN ಮೂರನೇ ಹಂತದಡಿಯಲ್ಲಿ ಸರ್ಕಾರ ಅಂತಿಮಗೊಳಿಸುತ್ತಿದೆ. 

ಭಾರತ ಸರ್ಕಾರದ ಈ ಯೋಜನೆ ಸದ್ಯಕೆ  ಕೆಲವು ಅಂತರಾಷ್ಟ್ರೀಯ ತಾಣಗಳನ್ನು ಮಾತ್ರ ಒಳಗೊಂಡಿದೆ. ಈ ಅಂತರರಾಷ್ಟ್ರೀಯ UDAN 'Regional Connectivity Scheme (RCS)' ನ ವಿಸ್ತರಣೆಗೆ ಅಂತರರಾಷ್ಟ್ರೀಯ ಮಾರ್ಗಗಳು ಮತ್ತು ಸ್ಥಳಗಳಿಗೆ ಕೇಂದ್ರೀಕರಿಸುತ್ತದೆ ಎಂದು DNA  ವರದಿ ಮಾಡಿದೆ. 

ಈ ಯೋಜನೆಯಡಿಯಲ್ಲಿ ಅಸ್ಸಾಂ ವಿಮಾನ ನಿಲ್ದಾಣಗಳು ಬ್ಯಾಂಕಾಕ್ ಮತ್ತು ಕಾತ್ಮಾಂಡುಗಳಿಗೆ ಸಂಪರ್ಕವನ್ನು ಪಡೆಯಬಹುದು. ಆದರೆ ಇದೇ ವೇಳೆಯಲ್ಲಿ ನೇಪಾಳ, ಬಾಂಗ್ಲಾದೇಶ ಮತ್ತು ಮಯನ್ಮಾರ್ ಮತ್ತು ಚೆನ್ನೈಗಳ ವಿಮಾನ ನಿಲ್ದಾಣಗಳಿಗೆ ಬಿಹಾರ ವಿಮಾನ ನಿಲ್ದಾಣಗಳು ನೇರ ಸಂಪರ್ಕವನ್ನು ಪಡೆಯಬಹುದು. 

ಕೆಲ ವರದಿ ಪ್ರಕಾರ Spicejet ನಂತಹ ವಿಮಾನಯಾನ ಸಂಸ್ಥೆಗಳು ಈಗಾಗಲೇ ಪ್ರಸ್ತಾಪವನ್ನು ಆಸಕ್ತಿ ತೋರಿವೆ. UDAN ಅಡಿಯಲ್ಲಿ ಸಣ್ಣ ಪಟ್ಟಣಗಳಿಗೆ ವಿಮಾನ ಟಿಕೆಟ್ಗಳು ಒಂದು ಗಂಟೆ ಪ್ರಯಾಣಯಾಗಿದ್ದು ಕೆವಲ 2500 ರೂಗಾಲ ವೆಚ್ಚವಾಗಲಿದೆ. ಈ ಮೂಲಕ ಅಂತರರಾಷ್ಟ್ರೀಯ ಮಾರ್ಗಗಳಿಗೆ ಇದನ್ನು ವಿಸ್ತರಿಸಲು ಸರ್ಕಾರವು ಯೋಜಿಸಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :