ಪೆಟಿಎಂ ನಿರ್ಮಾತ ವಿಜಯ್ ಶೇಖರ್ ಶರ್ಮಾ ಅವರ ಪೇಟಿಎಂ ಪೇಮೆಂಟ್ ಬ್ಯಾಂಕ್ ದೆಹಲಿ ಎನ್ಸಿಆರ್ನ ಹಿರಿಯ ನಾಗರಿಕರಿಗೆ ಈಗ ಮನೆಯಲ್ಲಿ ಹಣವನ್ನು ತಲುಪಿಸುವುದಾಗಿ ಘೋಷಿಸಿದೆ. ಈ ಮೂಲಕ ಬಳಕೆದಾರರು ತಮ್ಮ Paytm Payments Bank ಅಪ್ಲಿಕೇಶನ್ನಲ್ಲಿ ನಗದು ಹಿಂಪಡೆಯುವ ವಿನಂತಿಗಳನ್ನು ನೀಡಬಹುದು. ಮತ್ತು ಮೊತ್ತವನ್ನು ಅವರ ಮನೆಯಲ್ಲಿ ತಲುಪಿಸಲಾಗುತ್ತದೆ. ಕರೋನವೈರಸ್ ಸಾಂಕ್ರಾಮಿಕದಿಂದ ಪ್ರಪಂಚದಾದ್ಯಂತದ ಮುಖ್ಯವಾಗಿ ಹಿರಿಯ ನಾಗರಿಕರು ದೊಡ್ಡ ಅಪಾಯದಲ್ಲಿದ್ದಾರೆ. ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ನಾಗರಿಕರ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಮಾತನಾಡಿದರು.
ಅಂಗವಿಕಲರು ಮತ್ತು ವಯಸ್ಸು, ಆರೋಗ್ಯ ಅಥವಾ ಇತರ ಯಾವುದೇ ಸಮಸ್ಯೆಗಳಿಂದಾಗಿ ಎಟಿಎಂ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಲು ಸಾಧ್ಯವಾಗದ ಜನರಿಗೆ ನಮ್ಮ ಇತ್ತೀಚಿನ 'ಕ್ಯಾಶ್ ಅಟ್ ಹೋಮ್' ಎನ್ನುವ ಹೊಸ ಕಾರ್ಯದ ಈ ಸೌಲಭ್ಯ ಅಪಾರ ಸಹಾಯ ಮಾಡುತ್ತದೆ ಎಂದು ಪೇಟಿಎಂ ಪಾವತಿ ಬ್ಯಾಂಕ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸತೀಶ್ ಕುಮಾರ್ ಗುಪ್ತಾ ಹೇಳಿದರು. ಇದು ಕೇವಲ KYC ಪೂರ್ಣಗೊಳಿಸಿರುವ ಬಳಕೆದಾರರಿಗೆ ಮಾತ್ರ ಈ ಫೀಚರ್ ಪೆಟಿಎಂ ಅಪ್ಲಿಕೇಶನ್ ಅಲ್ಲಿ ಕಾಣಿಸಲಿರುವುದು ವಿಶೇಷ.
ಈ ವೈಶಿಷ್ಟ್ಯದ ಮೂಲಕ ಬಳಕೆದಾರರು ಕನಿಷ್ಠ ₹1,000 ಮತ್ತು ಗರಿಷ್ಠ ₹5,000 ಗೆ ವಿನಂತಿಸಬಹುದು. ಮತ್ತು ಎರಡು ದಿನಗಳಲ್ಲಿ ಬ್ಯಾಂಕ್ ಕಾರ್ಯನಿರ್ವಾಹಕರು ತಮ್ಮ ಮನೆಯಲ್ಲಿ ಈ ಹಣವನ್ನು ತಲುಪಿಸುತ್ತಾರೆ. ಬ್ಯಾಂಕ್ ಇತ್ತೀಚೆಗೆ ಡೈರೆಕ್ಟ್ ಬೆನಿಫಿಟ್ಸ್ ಟ್ರಾನ್ಸ್ಫರ್ (DBT) ಸೌಲಭ್ಯವನ್ನು ಸಹ ಪ್ರಾರಂಭಿಸಿತ್ತು. ಇದರ ಮೂಲಕ ಗ್ರಾಹಕರು ಸರ್ಕಾರದ ಸಹಾಯಧನವನ್ನು ನೇರವಾಗಿ ತಮ್ಮ PPBL ಉಳಿತಾಯ ಖಾತೆಯಲ್ಲಿ ಪಡೆಯಬಹುದು. ಕರೋನವೈರಸ್ ಲಾಕ್ಡೌನ್ ಸಮಯದಲ್ಲಿ ಸಹ ಬ್ಯಾಂಕ್ ₹600 ಕೋಟಿಯನ್ನು ಫಿಕ್ಸ್ ಡೆಪೊಸ್ಟಿಟ್ಗಳಲ್ಲಿ ಪಡೆದಿದೆ ಎಂದು ಮೇ ತಿಂಗಳ ಆರಂಭದಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಘೋಷಿಸಿತ್ತು.
ಈ ಅವಧಿಯಲ್ಲಿ ಇತರ ಆಸ್ತಿ ವರ್ಗಗಳಲ್ಲಿನ ಚಂಚಲತೆಯನ್ನು ಗಮನಿಸಿದರೆ ಅನೇಕ ಬಳಕೆದಾರರು ತಮ್ಮ ಉಳಿತಾಯವನ್ನು ಫಿಕ್ಸ್ ಡೆಪೊಸ್ಟಿಟ್ಗಳಿಗೆ ವರ್ಗಾಯಿಸುತ್ತಿದ್ದಾರೆ ಎಂದು ಕಂಪನಿ ಹೇಳಿದೆ. ಪೇಟಿಎಂ ಆಯಪ್ನಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಈ 'ಕ್ಯಾಶ್ ಎಟ್ ಹೋಮ್' ಪೀಚರ್ ಮೇಲೆ ಕ್ಲಿಕ್ ಮಾಡಿ ತಮಗೆ ಬೇಕಾದಷ್ಟು ಹಣವನ್ನು ನಮೂದಿಸಿದರೆ ನೇರವಾಗಿ ಹಣವನ್ನು ಮನೆ ಬಾಗಿಲಿಗೆ ಬಂದು ತಲುಪಿಸುವ ಕಾರ್ಯವನ್ನು ಮಾಡುತ್ತದೆ. ಸದ್ಯ ಲಾಕ್ಡೌನ್ನಿಂದಾಗಿ ದೇಶದ ಆರ್ಥಿಕ ಸ್ಥಿತಿ ನೆಲ ಕಚ್ಚಿದೆ. ಸಾಕಷ್ಟು ಜನರು ಹಣವಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಸಂಧರ್ಭಗಳಲ್ಲಿ ಈ ಮಾದರಿಯ ಯೋಜನೆ ಜನರಿಗೆ ಹೆಚ್ಚು ಸಹಾಯವಾಗುತ್ತದೆ.